ನಿರ್ಲಕ್ಷ್ಯ

ಒಡಲಾಳದಲ್ಲಿನ
ಅಪರಿಚಿತ ಆರ್ತ ಕೂಗು ಕೇಳಿ
ಏನಿರಬಹುದೆಂದು ತಡಕಿ ನೋಡಿದೆ
ಮನದ ಸುಳಿಗೆ ಸಿಲುಕಿ
ಕವಿತೆಯೊಂದು ಕೈಕಾಲು ಬಡಿಯುತ್ತ
ಉಸಿರಿಗಾಗಿ ಕೊಸರಾಡುತ್ತಿತ್ತು

ಸತ್ತರೆ ಸಾಯಲೆಂದು
ಸುಮ್ಮನಾಗಿ
ಮುಷ್ಠಿ ಸಡಿಲಿಸಿದೆ

Comments

Popular posts from this blog

ಶುಕ್ರ ಸಂಕ್ರಮಣ

ಆ ಮೊದಲ ಉಳಿ ಪೆಟ್ಟು

ತ್ಯಾಜ್ಯದಿಂದ ವಿದ್ಯುತ್ - ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಶಾಶ್ವತ ಪರಿಹಾರ?