Wednesday 2 June 2010

ನಿರ್ಲಕ್ಷ್ಯ

ಒಡಲಾಳದಲ್ಲಿನ
ಅಪರಿಚಿತ ಆರ್ತ ಕೂಗು ಕೇಳಿ
ಏನಿರಬಹುದೆಂದು ತಡಕಿ ನೋಡಿದೆ
ಮನದ ಸುಳಿಗೆ ಸಿಲುಕಿ
ಕವಿತೆಯೊಂದು ಕೈಕಾಲು ಬಡಿಯುತ್ತ
ಉಸಿರಿಗಾಗಿ ಕೊಸರಾಡುತ್ತಿತ್ತು

ಸತ್ತರೆ ಸಾಯಲೆಂದು
ಸುಮ್ಮನಾಗಿ
ಮುಷ್ಠಿ ಸಡಿಲಿಸಿದೆ

0 ಪ್ರತಿಕ್ರಿಯೆ(ಗಳು):