Posts

ತ್ಯಾಜ್ಯದಿಂದ ವಿದ್ಯುತ್ - ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಶಾಶ್ವತ ಪರಿಹಾರ?

ಕಸದಿಂದ ರಸ ತೆಗೆಯುವ ಅನೇಕ ವಿಧಾನಗಳು ನಮಗೆ ಪರಿಚಿತ. ಆದರೆ ಕಸದಿಂದ ವಿದ್ಯುತ್ ಕೂಡ ತಯಾರಿಸಬಹುದೆಂದು ನಮ್ಮಲ್ಲಿ ಬಹುತೇಕರಿಗೆ ಗೊತ್ತಿರಲಾರದು. ಇಲ್ಲಿ ಕಸ ಎಂದರೆ ಯಾವುದೋ ಒಂದು ಬಗೆಯ ಕಸ ಮಾತ್ರವಲ್ಲ. ಬೆಂಗಳೂರಿನ ಸದ್ಯದ ಕಸ ವಿಲೇವಾರಿ ಸಮಸ್ಯೆಯಿಂದ ಅಲ್ಲಲ್ಲಿ ತಿಪ್ಪೆಗಳಾಗಿ ರಾಶಿ ರಾಶಿಯಾಗಿ ಕಾಣಸಿಗುವ ಒಣ ಮತ್ತು ಹಸಿ ಮಿಶ್ರಿತ ತ್ಯಾಜ್ಯ, ಕೈಗಾರಿಕಾ ಕಸ, ಜೈವಿಕ ತ್ಯಾಜ್ಯ, ಪ್ಲಾಸ್ಟಿಕ್ ಇನ್ನೂ ಹಲವು ಬಗೆಯ ತ್ಯಾಜ್ಯ - ಇವೆಲ್ಲವುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ "ಅನಿಲೀಕರಣ" ತಂತ್ರಜ್ಞಾನ ಲಭ್ಯವಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನೇ ದೊಡ್ಡದಾಗಿಸಿಕೊಂಡು ಬೆಂಗಳೂರಿನ ಬಿ.ಬಿ.ಎಂ.ಪಿ ಒದ್ದಾಡುತ್ತಿರುವಾಗ, ಪುಣೆಯಲ್ಲಿ ತ್ಯಾಜ್ಯದ ಅನಿಲೀಕರಣದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿತಗೊಂಡು ಅದರಿಂದ ವಿದ್ಯುತ್ ಸರಬರಾಜಾಗುತ್ತಿದೆ. ತ್ಯಾಜ್ಯ ವಿಂಗಡನೆ, ವಿಸರ್ಜನೆಗಳ ಸುತ್ತ ಎದ್ದಿರುವ ಸಮಸ್ಯೆಗಳ ಭರಾಟೆಯಲ್ಲಿ, ಇದಕ್ಕೆ ಸರಿಯಾದ ಪ್ರಚಾರವಿಲ್ಲದೆ, ಸರ್ಕಾರವೂ ಈ ನಿಟ್ಟಿನಲ್ಲಿ ಚಿಂತಿಸದೇ ಇದು ಬೆಳಕಿಗೆ ಬರದಿರುವುದು ವಿಪರ್ಯಾಸದ ಸಂಗತಿ. ಈ ತಂತ್ರಜ್ಞಾನವನ್ನು ಅವಲೋಕಿಸುವ ಮುನ್ನ ತ್ಯಾಜ್ಯ ನಿರ್ವಹಣೆಗೆ ಈಗ ಬಿ.ಬಿ.ಎಂ.ಪಿ ಅನುಸರಿಸುತ್ತಿರುವ ವಿಧಾನದಲ್ಲಿರುವ ಸಮಸ್ಯೆ, ಕೊರತೆ ಹಾಗೂ ಸವಾಲುಗಳನ್ನು ಗಮನಿಸೋಣ. ತ್ಯಾಜ್ಯ ನಿರ್ವಹಣೆಗಾಗಿ ಸದ್ಯ ಬಳಕೆಯಲ್ಲಿರುವ ಪ್ರಕ್ರಿಯೆ ಹೀಗಿದೆ: 1. ಪ್ರತಿ ವಾರ್ಡ್‍ನ ಪ್ರತಿ

ನಿರೀಕ್ಷೆ

ಮೂಡಬೇಕಿದೆ ಒಡಮೂಡಬೇಕಿದೆಯಿನ್ನು ನನ್ನ ನಿನ್ನ ಸಹಯಾನದ ಹಾಡಿನಲಿ ಎದೆಯ ತುಂಬಿಸುವ ನವಪಲ್ಲವ ಬೇಗೆ ತಣಿಸುವ ಮಾರ್ದವ ಹಾಯಬೇಕಿದೆ ಒಳಹಾಯಬೇಕಿದೆಯಿನ್ನು ನನ್ನ ನಿನ್ನ ಅಂತರಂಗದಂಗಳದಲಿ ಹೊನ್ನ ಲೇಪದ ನಲ್ಬೆಳಕು ದುಗುಡ ಕರಗಿಸುವ ತಿಳಿಬೆಳಕು ಬರಬೇಕಿದೆ ತೇಲಿಬರಬೇಕಿದೆಯಿನ್ನು ನನ್ನ ನಿನ್ನ ಕಣ್ಣ ಕೊಳದಲಿ ಮುದ್ದು ಬಳುಕಿನ ಹಣತೆ ಸಾಲು ಎಲ್ಲ ಕನಸುಗಳ ಹೊಳಹಿನ ಪಾಲು

ಆ ಮೊದಲ ಉಳಿ ಪೆಟ್ಟು

ಎದುರಾಗಿದ್ದಾರೆ ಒಬ್ಬರಿಗೊಬ್ಬರು ಸುರಿವ ಬಿಸಿಲಲಿ ತೊಯ್ದ ಕಲ್ಲಿನ ಗಟ್ಟಿ ಉಳಿಯಲಿ ಕಲ್ಲನುಲಿಸುವ ಸಂಕಲ್ಪದಲಿ ಶಿಲ್ಪಿ ದಿಟ್ಟಿಸುತ್ತಿದ್ದಾನೆ ಕಲ್ಲನು ಶಾಂತವಾಗಿ ಉಲಿಯುತ್ತಿದ್ದಾನೆ ಏನೋ ನಿವೇದನೆಯ ತೆರದಿ ಕಲ್ಲೂ ಆಲಿಸುತ್ತಿದೆ ಮಾಂತ್ರಿಕ ಸ್ಪರ್ಶದ ಮಾತು ದೂರ ಅವನ ಸಮಕ್ಷಮವೇ ಸಾಕು! ನಿರ್ಜೀವ ಕಲ್ಲಲೂ ಹುಟ್ಟಿದೆ ಒಪ್ಪಗೊಂಡು ಭಾವ ಭಂಗಿಗಳ ಅವತಾರವೆತ್ತುವ ಬಯಕೆ ಶಿಲ್ಪಿಯ ಹಣೆ ಬೆವರುತಿದೆ ಕಲ್ಲು ಕಂಪಿಸುತಿದೆ ಉಸಿರು ಹಿಡಿದು ಒಮ್ಮೆಗೆ ನೇವರಿಸಿದ್ದಾನೆ ಕಲ್ಲನು ನಡುವೆ ಗಾಳಿ ಹಾಯಲು ಅವನೆದೆಗೆ ತಾಕಿದೆ ಸುಡುಗಲ್ಲಿನ ಅಂತರಂಗದ ತಂಪು ಕಲ್ಲಿಗಿನ್ನಾವ ಗಮ್ಯವಿಲ್ಲ ಶರಣಾಗಿದೆ ಶಿಲ್ಪಿಗೆ ನೋವುಣಿಸುವವನೂ ಅವನೆ ಒಡಲಲಿ ಹೂವರಳಿಸುವವನೂ ಅವನೆ ನಂಬುಗೆಯಲಿ ಕಣ್ಮುಚ್ಚಿ ಮೈಯ್ಯೊಡ್ಡಿದೆ ಹೇಗೆ ಅರಿತನೋ ಶಿಲ್ಪಿ! ಆ ಮೊದಲ ಉಳಿಯ ಪೆಟ್ಟಿಗೆ ಕಲ್ಲ ಒಡಲ ಜೀವೋನ್ಮೀಲಿತಗೊಳಿಸುವ ರಸಬಿಂದು ಯಾವುದೆಂದು! ಚಿಮ್ಮಿದೆ ಚಕ್ಕಳದ ಚೂರು ನೋವಿನ ನಲಿವಲಿ ಶಿಲ್ಪವಾಗುತಿದೆ ಕಲ್ಲು

ಬರ್ಫಿ - ಮುಗ್ಧ ಪ್ರೇಮದ ಹಲವು ಮುಖಗಳು

Image
ದೈಹಿಕ/ಮಾನಸಿಕ ದೌರ್ಬಲ್ಯಗಳುಳ್ಳ ಪಾತ್ರಗಳನ್ನೇ ಕೇಂದ್ರವಾಗಿರಿಸಿಕೊಂಡು ಬಾಲಿವುಡ್‍ನಲ್ಲಿ ಸಾಕಷ್ಟು ಚಿತ್ರಗಳು ಬಂದಿದ್ದರೂ, ಅವುಗಳಲ್ಲಿ ಪರಿಣಾಮಕಾರಿ ಕಥನ ಮತ್ತು ನಿರೂಪಣೆಯುಳ್ಳ ಚಿತ್ರಗಳು ಬೆರಳೆಣಿಕೆಯಷ್ಟು."ಸದ್ಮಾ" ಚಿತ್ರದಲ್ಲಿನ ಶ್ರೀದೇವಿ ಮತ್ತು ಕಮಲ್ ಹಾಸನ್ ರ ಅಭಿನಯವನ್ನು ಜನರು ಇಂದಿಗೂ ಮೆಚ್ಚುಗೆಯಿಂದ ನೆನೆಸಿಕೊಳ್ಳುತ್ತಾರೆ. "ಪಾ", "ಮೈ ನೇಮ್ ಈಸ್ ಖಾನ್"‍ನಂಥ ಚಿತ್ರಗಳು ಬಂದಿವೆಯಾದರೂ ಅವುಗಳಲ್ಲಿನ "ದೌರ್ಬಲ್ಯ ಪೀಡಿತ" ಪಾತ್ರಗಳು ಆಪ್ತವಾಗಿ ಉಳಿಯಲಿಲ್ಲ. "ಘಜಿನಿ" ಚಿತ್ರದಲ್ಲಿ ನೆನಪು-ಮರೆವುಗಳ ನಡುವೆ ಸಿಲುಕಿ ತಲ್ಲಣಿಸುವ ಪಾತ್ರವಿದ್ದರೂ, ಪ್ರೇಯಸಿಯ ಸಾವಿನ ಸೇಡಿನ ವೈಭವೀಕರಣ ಪಾತ್ರದ ಬೇರೆ ವೈಶಿಷ್ಟ್ಯಗಳನ್ನು ಮಾಸಲುಗೊಳಿಸಿತ್ತು. ಆದರೂ ಇತ್ತೀಚಿನ "ತಾರೆ ಝಮೀನ್ ಪರ್" ಮತ್ತು ಸುಮಾರು ಒಂದು ದಶಕದ ಹಿಂದೆ ತೆರೆಕಂಡಿದ್ದ "ಬ್ಲಾಕ್" ಚಿತ್ರಗಳು ಈ ನಿಟ್ಟಿನಲ್ಲಿ ಪ್ರಶಂಸೆ ಹಾಗೂ ಮೆಚ್ಚುಗೆ ಪಡೆದ ಚಿತ್ರಗಳು. ಮಾರುಕಟ್ಟೆಯ ಸೂತ್ರಗಳಿಗೆ ತಕ್ಕ ರಂಜಕ ಗುಣಗಳ ಮೇಲೆಯೇ ಪ್ರಾಶಸ್ತ್ಯ ನೀಡುವುದರಿಂದಲೋ ಅಥವಾ ಥಳುಕು-ಬಳುಕು, ತಾರಾ ವರ್ಚಸ್ಸು, ನಾಟಕೀಯತೆ, ವೈಭವೀಕರಣಗಳ ವಿಪರೀತ ವ್ಯಾಮೋಹದಿಂದಲೋ ಬಹುತೇಕ ನಿರ್ದೇಶಕರು ಸಿನೆಮಾದ ಸಿದ್ಧ ಮಾದರಿಗಳಿಗೆ ಶರಣಾಗಿರುವುದಂತೂ ಸುಳ್ಳಲ್ಲ. ಎರಡು ವಾರಗಳ ಕೆಳಗೆ ಬಿಡುಗಡೆಗೊಂಡಿರುವ "ಬರ್ಫಿ&qu

ಮಾತು-ಮೌನ-ಮನಸ್ಸು

ಮಾತು ಮಾತುಗಳ ನಡುವೆ ಅದೆಲ್ಲಿಂದ ಬಂದು ಕೂರುವುದೊ ಕ್ರೂರ ಮೌನದ ಪದರ!? ಯಾವ ಮುಲಾಜೂ ಇಲ್ಲ ಯಾವ ದನಿಯೂ ಬೇಕಿಲ್ಲ ಅದಕೆ! ನಲ್ಮೆಯ ಮಾತು, ಕೋಪದ ಮಾತು ಸವಿ ನುಡಿ ಕಹಿ ನುಡಿ ಹೇಳಲೇ ಬೇಕೆಂದಿದ್ದ ಬಾಯಿ, ಆಲಿಸಲೆಂದೇ ಕಾದಿದ್ದ ಕಿವಿಗಳು ಎಲ್ಲವನೂ ಹೆಡೆಮುರಿಕಟ್ಟಿ ಹೊಸಕಿ ನಿಲ್ಲುತ್ತದೆ! ಮೌನಕೂ ಇರಬೇಕಿತ್ತು ಅಂತಃಕರಣ! ಕಾರಿರುಳ ಕತ್ತಲೆಯ ಬೆಂಬಲಕೆ ನಿಂತ ದುರುಳ ಗಾಳಿ ಹಚ್ಚಲು ಹೊರಟ ಹಣತೆಯ ಬಲಿತೆಗೆದುಕೊಳ್ಳುವುದು ಇಲ್ಲೂ, ಚೀತ್ಕಾರವೆಲ್ಲ ಆಕಾಶದೊಳು ಲೀನವಾಗುತಿರಲು ದೈನ್ಯದಲೆ ಬೇಡಲು ಹೊರಟ ಮಾತಿನ ಪ್ರಾಣಪಕ್ಷಿ ಹಾರಿಸಲು ಮೌನಕೆ ಬಿಗುಮಾನ ಜೊತೆಯಾಗಿದೆ ಆಕಾಶದ ವಿಸ್ತಾರಕೆ ಮೋಡಗಳು ಹೆದರುವುದುಂಟೆ! ಎಲ್ಲೆಲ್ಲಿಂದಲೋ ಒಟ್ಟುಗೂಡಿ ತಮ್ಮ ಪಾಡಿಗೆ ತಾವು ಹೆಪ್ಪುಗಟ್ಟಿ ಭಾರ ತಾಳಲಾರದೇ ಮಳೆಯಾಗಿ ಇಳೆಯ ಮಡಿಲು ಸೇರುವುವುವಲ್ಲವೆ! ಮೌನಕೂ ಮಾತಿಗೂ ಮನಸ್ಸಿನದೇ ಹಂಗು ನಿಜ ನಾಟಕದ ಮಧ್ಯದಲಿ ಸೂತ್ರಧಾರನ ಕಪಟ ನಾಟಕ ಮುಂದಡಿಯಿಡುವುದೇ ಮನಸ್ಸು ಮಾತುಗಳನು ಪ್ರಚಂಡ ಪ್ರವಾಹವಾಗಿಸಲು! ಮೌನದ ಅಣೆಕಟ್ಟನು ಸಿಡಿಸಿ ಚೂರಾಗಿಸಲು!?

ಬೀದಿ ಬದಿಯ ಬಾಣಸಿಗ

ಕಾದು ಹಬೆಯಾಡುವ ಕಾವಲಿ ಅತ್ತಿಂದಿತ್ತ ಪುಟು ಪುಟು ಹೆಜ್ಜೆಯಿಡುವ ಮಾಣಿಗಳ ನಡುವೆ ಬಂದ ಬಂದವರ ಹಸಿವು ನೀಗಿಸಲು ನಿಂತಿಹನು ಬಾಣಸಿಗ ನಿಗಿ ನಿಗಿ ಕಾವಲಿಯ ಶಾಖದಲಿ ಬೆಚ್ಚಗಿರಿಸಿಟ್ಟಿರುತ್ತಾನೆ ತನ್ನ ಕನಸುಗಳ ಅದಾವ ಬೇಸರ ಮೂಡುವುದೋ ಅವೇ ಕನಸುಗಳು ಸಾಕೆನಿಸಿ ಬೊಗಸೆ ತುಂಬ ನೀರು ಚಿಮುಕಿಸುವನು ಧುಸ್‌ಸ್‌ಸ್‌ಸ್!!!! ಅಷ್ಟೆ! ಪೊರಕೆಯ ಬೀಸಿನಲಿ ಎಲ್ಲವನು ಬದಿಗೊತ್ತಿ ಹೊಸ ಕನಸುಗಳ ಹುದುಗಿಸಿಡುವನು ಕಯ್ಯೊಳರಳುವ ಬಗೆ ಬಗೆ ಪಾಕ ಇಳಿವ ಗಂಟಲಾವುದೊ? ಆರಿಸುವ ಕ್ಷುದಾಗ್ನಿ ಯಾರದೊ? ಮತ್ತೆ ಉಸಿರು ಪಡೆವ ಜೀವ ಯಾವುದೊ?! ಹೆಸರು, ಗುರುತು, ನಂಟುಗಳ ಬಾಹಿಗೆಯಲಿ ಸಾಗುವ ಕೈಂಕರ್ಯ! ತಿನಿಸನರಸಿ ಬರುವ ಹೊಸ ಹೊಸ ಮುಖಗಳು ಮಾತು, ಮುಗುಳ್ನಗು ವಿನಿಮಯಗೊಳ್ಳವು ಸುಲಭಕೆ ತಟ್ಟೆ ಇವನ ಕೈಗಳ ದಾಟಿ ಅವರ ಕೈಸೇರಿದೊಡನೆ ಅವರು ತೆತ್ತ ದುಡ್ಡು ಇವನ ಋಣ ತೀರಿಸಿಬಿಡುವುದಂತೆ!!!

ಶುಕ್ರ ಸಂಕ್ರಮಣ

ಜೂನ್ ೬, ೨೦೧೨ ರಂದು ಒಂದು ಅಪರೂಪದ ವಿದ್ಯಮಾನ ಅಂತರಿಕ್ಷದಲ್ಲಿ ಸಂಭವಿಸಲಿದೆ. ಅದನ್ನು ನೇರವಾಗಿ ವೀಕ್ಷಿಸುವ ಅವಕಾಶ ಹೊಂದಿರುವ ನಾವೆಲ್ಲ ಅದೃಷ್ಟವಂತರೇ ಸರಿ! ವಿಜ್ಞಾನಿಗಳು, ಖಗೋಳಶಾಸ್ತ್ರಜ್ಞರು, ಹವ್ಯಾಸಿಗಳು, ವೃತ್ತಿಪರರು, ವಿಜ್ಞಾನಾಸಕ್ತರು ಮತ್ತು ಸಾಮಾನ್ಯ ಜನತೆ ಕೂಡ ಅಂತರಿಕ್ಷದಲ್ಲಿ ನಡೆಯಲಿರುವ ಈ ದೃಶ್ಯ ಚಮತ್ಕಾರದ ವೀಕ್ಷಣೆಯ ಪ್ರತಿಕ್ಷಣವನ್ನೂ ಆನಂದಿಸಲು ಅಣಿಯಾಗುತ್ತಿದ್ದಾರೆ. ಅದುವೆ "ಶುಕ್ರ ಗ್ರಹದ ಸಂಕ್ರಮಣ"! ಶುಕ್ರ ಗ್ರಹವು ಕಪ್ಪು ಚುಕ್ಕಿಯಂತೆ ಸೂರ್ಯನ ಮೇಲೆ ಮಂದವಾಗಿ ಹಾದುಹೋಗಲಿದೆ ಮತ್ತು ಈ ಚಲನೆಯ ದೃಶ್ಯ ಸೂರ್ಯೋದಯದಿಂದ ಬೆಳಿಗ್ಗೆ ೧೦.೩೦ರ ವರೆಗೆ ಗೋಚರಿಸಲಿದೆ. ಈ ವಿದ್ಯಮಾನ ಯಾಕೆ ಅಪರೂಪ ಮತ್ತು ನಾವೇಕೆ ಇದನ್ನು ವೀಕ್ಷಿಸಬಹುದಾದ ಭಾಗ್ಯಶಾಲಿಗಳು? ಜೂನ್ ೬, ೨೦೧೨ ರಂದು ಇದರ ವೀಕ್ಷಣೆ ತಪ್ಪಿಸಿಕೊಂಡಲ್ಲಿ ನಾವಿದನ್ನು ನಮ್ಮ ಜೀವಮಾನದುದ್ದಕ್ಕೂ ನೋಡಲಾರೆವು. ಕಾರಣ ಇದು ಮತ್ತೆ ಸಂಭವಿಸಲಿರುವುದು ೧೧ ಡಿಸೆಂಬರ್, ೨೧೧೭ಕ್ಕೆ. ಈ ಹಿಂದೆ ಇದೇ ರೀತಿಯ ಘಟನೆ ನಡೆದದ್ದು ಜೂನ್ ೮, ೨೦೦೪ರಲ್ಲಿ.  ಇದು ಲೆಕ್ಕಾಚಾರ ಅಥವಾ ಇನ್ನಾವುದೇ ಅಳತೆಗೆ ಸಿಗದ ಯಾದೃಚ್ಛಿಕ ವಿದ್ಯಮಾನವಲ್ಲ. ಇದಕ್ಕೊಂದು ಕ್ರಮವಿದೆ. ಶುಕ್ರ ಸಂಕ್ರಮಣವು ೮ ವರ್ಷಗಳ ಅಂತರವಿರುವ ಜೋಡಿ ಇಸವಿಗಳಲ್ಲಿ ಸಂಭವಿಸುತ್ತದೆ. ಮಾತ್ರವಲ್ಲದೆ ಈ ಜೋಡಿ ಇಸವಿಗಳ ನಡುವಿನ ಅಂತರ ೧೨೧.೫ ಮತ್ತು ೧೦೫.೫ ವರ್ಷಗಳಂತೆ ಅದಲು ಬದಲಾಗುತ್ತಿರುತ್ತದೆ. ಈ ಕ